ಪ್ರಳಯ

 

ಈಚೀಚೆಗೆ ಕೆಲವಾರು ಅಧ್ಬುತ ಅನ್ನಬಹುದಾದ ಸಮಾಚಾರಗಳು ಟೀವೀಯಲ್ಲಿ ಪ್ರಸಾರವಾಗುತ್ತಿದೆಯಂತೆ. ಇದನ್ನು ನಾನು ಹೀಗೇ ಕೇಳಿದ ವಿಷಯ ಅನ್ನಬೇಕು. ಅದಕ್ಕೇಪ್ರಸಾರವಾಗುತ್ತಿದೆಯಂತೆಅಂದಿದ್ದೀನೆ. ಕಾರಣ ನನ್ನ ಮನೆಯಲ್ಲಿ ನಾನು ಎಂದೂ ಟೀವೀ ಇಟ್ಟುಕೊಂಡಿಲ್ಲ. ತಿಕ್ಕಲತನ ಯಾಕೆ, ಬಗ್ಗೆ ಬೇರೆ ಯಾವಾಗಲಾದರೂ ಬರೆಯುತ್ತೇನೆ.

ಅಧ್ಬುತ ಸಮಾಚಾರಗಳ ಪ್ರಕಾರ ಸನ್ ಎರಡುಸಾವಿರದಹನ್ನೆರಡನೇ ಇಸವಿಯಲ್ಲಿ ಪೃಥಿವಿ ಅಂತವಾಗುತ್ತಂತೆ. ಒಂದು ಊಹೆಯ ಪ್ರಕಾರ ಅಂತ ೧೨ ಜನುವರಿ ೨೦೧೨; ಇನ್ನೊಂದು ಅನುಮಾನದ ಪ್ರಕಾರ ೨೧ ಡಿಸೆಂಬರ್ ೨೦೧೨. Read the rest of this entry »

Comments (2)

ಹದಿನೆಂಟು ಹೊಸಿಲುಗಳು

ಹದಿನೆಂಟು ಹೊಸಿಲುಗಳು

ಎಲ್ಲಾ ಸಸ್ಯಗಳು ಮತ್ತು ಜಂತುಗಳು ಜೀವಂತ ವಸ್ತುಗಳು. ಆದರೆ ನಿರ್ಜೀವಿಯಂತೆ ಕಾಣುವ ಒಂದು ಕಲ್ಲು, ಒಂದು ಮನೆ, ಒಂದು ಕುರ್ಚಿ ಅಥವಾ ಮೇಜು ಇವುಗಳೂ ಜೀವಂತ ವಸ್ತುಗಳು.  ಹುಟ್ಟುತ್ತವೆ, ಅಥವಾ ತಯಾರಿಸಲ್ಪಡುತ್ತವೆ.  ಕೆಲವು ಕಾಲ ಕೆಲಸಕ್ಕೆ ಬರುತ್ತವೆ. ಕಾಲ ಕಳೆದಂತೆ ಅವುಗಳ ಶಕ್ತಿ, ಕೆಲಸಕ್ಕೆ ಬರುವ ಸಾಧ್ತ್ಯತೆ ಮತ್ತು ಬಲಿಷ್ಠತೆ ಕಮ್ಮಿ ಆಗುತ್ತೆ.  ಮನೆ ಗೋಡೆಯೊಂದು ಕುಸಿಯುತ್ತೆ, ಕುರ್ಚಿಯ ಕಾಲೊಂದು ಮುರಿಯುತ್ತೆ.  ಸರಿ, ರಿಪೇರಿ ಮಾಡಿಸಿಕೋಬಹುದು. ಆದರೆ ಒಮ್ಮೆ ರಿಪೇರಿಗೆ ಹೋದಮೇಲೆ ಮೊದಲಿನ ಧಾರ್ಡ್ಯ ಇರುವುದಿಲ್ಲ.

ಕಾಡಿನಲ್ಲೇ ಬೇಟೆಮಾಡಿ ಊಟ ಸಂಪಾದಿಸಿಕೊಳ್ಳುವ ಹುಲಿಚಿರತೆತೋಳಗಳು ಅಥವಾ ಬೇರೊಬ್ಬರಿಂದ ಪೋಷಿಸಿಕೊಂಡ ನಾಯಿ ಬೆಕ್ಕುಗಳು ಮತ್ತು ಇವುಗಳ ಮೇಲೆ ಅಧಿಕಾರ ಚಲಾಯಿಸಬಲ್ಲೆ ಎಂದು ಹೆಮ್ಮೆ ಪಡುವ ಮಾನವರಿಗೂ ಏನಾದರೂ ವ್ಯತ್ಯಾಸ ಇದೆಯೇ?  ಅಪ್ಪ ಕಟ್ಟಿದ ಮನೆಯಲ್ಲಿ ಬೆಳೆದು ಮನೆಯೂಟ ತಿಂದು ಜೋಪಾನವಾಗಿ ದೊಡ್ಡವರಾಗಿ ವಿದ್ಯಾಭ್ಯಾಸ ಮಾಡಿ ಸಂಬಳ ಬರುವ ಕೆಲಸಕ್ಕೆ ಸೇರಿ ಮದುವೆ ಮಾಡಿಕೊಂಡು ಸಂಸಾರ ಮಾಡಿ ಮಕ್ಕಳನ್ನು ದೊಡ್ಡವರಾಗಿಸಿ ಅವರನ್ನೂ ಸಂಸಾರವಂದಿಗರಾಗಿ ಮಾಡಿ ತಕ್ಕಮಟ್ಟಿಗೆ ಆಸ್ತಿ ಮಾಡಿಕೊಳ್ಳದಿದ್ದರೂ ತನ್ನ ಕೊನೆಗಾಲದಲ್ಲಿ ಸ್ವಂತ ಮನೆಯೊಂದನ್ನು ಬೆಂಗಳೂರಿನಲ್ಲಾಗಲೀ ಅಥವಾ ಅಂತಹ ಅರ್ಥಿಕ ಕ್ಷಮತೆ ಇಲ್ಲದಿದ್ದರೆ ಇನ್ನು ಯಾವುದಾದರೂ ಕೊಂಪೆಯಲ್ಲಾಗಲೀ ಮಾಡಿಕೊಂಡು, ಅಥವಾ ಅಂತಹ ಕಳಪೆ ಕ್ಷಮತೆಯೂ ಇಲ್ಲದಿದ್ದರೆ ಅಪ್ಪ ಕಟ್ಟಿದ್ದ ಕುಸಿದುಬೀಳುತ್ತಿರುವ ಪಾಳುಮನೆಯಲ್ಲೇ sit on your arse for fifty years and hang your hat on a pension ಅಂತ ಅಳವಡಿಸಿಕೊಂಡ ಕವಿಯ ಉಕ್ತಿಯಂತೆ ಕೊನೆಯ ಹಂತದ ಜೀವನ ನಡೆಸಿ ಸಾಯುವವರದೂ ಇದೇ ಕತೆ. ವಾಕ್ಯ ಸ್ವಲ್ಪ ಉದ್ದವಾಯ್ತಲ್ವಾ?  ಏನು ಮಾಡ್ಲಿ, ಕನ್ನಡ ಬರೆಯೋದ್ನ ಇನ್ನಷ್ಟು ಲಕ್ಷಣ್ವಾಗಿ ಕಲ್ತುಕೋಬೇಕು.  ಇರಲಿ.

ಉದಾಹರಣೆಗೆ ಕೋಲಾರದ ಕಠಾರಿಪಾಳ್ಯದಲ್ಲಿ ಅಪ್ಪ ಕಟ್ಟಿದ ಹದಿನೆಂಟು ಹೊಸಿಲುಗಳಿರುವ ಈ ಮನೆ, ಮತ್ತು ಈಗ ಇಲ್ಲಿ ವಾಸಮಾಡಿಕೊಂಡು ಕಾಯುತ್ತಿರುವ ಈ ಮನೆಗಿಂತ ಮೂರು ವರುಷ ಮುದಿಯನಾದ ನಾನು, ನನ್ನ ಅಪ್ಪ ಮತ್ತು ಅಮ್ಮನ ಹನ್ನೊಂದನೆಯ ಮತ್ತು ಕೊನೆಯ ಸಂತಾನ. Read the rest of this entry »

Comments (5)

ಬೋಳೀಮಗನ ಕತೆ

 

 ಸನ್ ಸಾವಿರದೊಂಭೈನೂರನಲವತ್ತೆಂಟನೇ ಇಸವಿ ಏಪ್ರಿಲ್ ನಲ್ಲಿ ಅಪ್ಪ ತನ್ನರವತ್ಮೂರನೇ ವಯಸ್ಸಿನಲ್ಲಿ ತೀರಿಕೊಂಡ. ಅಮ್ಮ ಅಪ್ಪನಿಗಿಂತಾ ಹತ್ತು ವರುಷ ಸಣ್ಣವಳು. ಆಗ ನನಗಿನ್ನೂ ಹನ್ನೆರಡು ತುಂಬಿರಲಿಲ್ಲ.

  

ಅಪ್ಪ ಸತ್ತಮೇಲೆ ಕೆಲವು ತಿಂಗಳುಗಳು ಅಮ್ಮ ನೋಡಲು ಎಂದಿನಂತೆಯೇ ಇದ್ದಳು. ಐವತ್ತಕ್ಕೆ ಮೀರಿದ ಸಣಕಲು ಹೆಂಗಸು. ಎಂದಿನಂತೆ ಅಗ್ಗದ ಬೆಲೆಯ ಸೀರೆ, ರವಿಕೆ. ಆದರೂ ಕೆಲವು ಬದಲಾವಣೆಗಳು ನನ್ನ ಗಮನಕ್ಕೆ ಬಂದಿದ್ದವು. ಕತ್ತಿನ ಸುತ್ತ ಕರೀಮಣಿ ಸರ ಮತ್ತು ಮಾಂಗಲ್ಯ ಇರಲಿಲ್ಲ. ವಾಲೆಮೂಗುತಿಗಳಿರಲಿಲ್ಲ. ಹಣೆಯ ಮೇಲೆ ಕುಂಕುಮದ ಬೊಟ್ಟು ಇರಲಿಲ್ಲ. ಕೆನ್ನೆಯ ಮೇಲೆ ಅರಿಸಿನದ ನುಣುಹೊಳಪು ಇರಲಿಲ್ಲ. ಮುಂಗೈನ ಬಳೆಗಳು ಮತ್ತು ಕಾಲುಂಗರಗಳು ಇರಲಿಲ್ಲ. ಆದರೆ ಇವುಗಳ ಅರ್ಥವೇನು ಅನ್ನುವುದು ಸ್ಪಷ್ಟವಾಗಿರಲಿಲ್ಲ.

  

ಆದರೆ ಒಂದು ದಿನ ಎಲ್ಲವೂ ಸ್ಪಷ್ಟವಾದವು. Read the rest of this entry »

Comments (3)

ಮನೆಕೆಲಸದವರು

ನ್ ಸಾವಿರದೊಂಭೈನೂರರವತ್ನಾಲ್ಕನೇ ಇಸವಿಯಲ್ಲಿ ನಾನು ಮೊದಲಬಾರಿಗೆ ಮನೆಕೆಲಸಕ್ಕೆ ಸಹಾಯಕರನ್ನೊಬ್ಬರನ್ನು ಇಟ್ಟುಕೊಂಡಿದ್ದು. ಅದಕ್ಕೆ ಮುಂಚೆ ಮನೆಯ ಕೆಲಸಗಳನ್ನೆಲ್ಲಾ, ಅಂದರೆ ಕಸಗುಡಿಸುವುದು, ನೆಲ ಸಾರಿಸುವುದು, ಬಟ್ಟೆ ಒಗೆಯುವುದು, ಅಡುಗೆ, ಇತ್ಯಾದಿ ಎಲ್ಲಾ, ನಾನು ಮತ್ತು ನನ್ನ ಅಮ್ಮ, ಮತ್ತು ಕರ್ನಾಟಕ ಬಿಟ್ಟನಂತರ ನಾನೇ ಮಾಡುತ್ತಿದ್ದೆ. ಈ ಕಳೆದ ನಲವತ್ತೈದು ವರುಷಗಳಲ್ಲಿ (೧೯೬೪-೨೦೦೯) ನಾಲ್ಕು ಮಂದಿ ಮನೆಕೆಲಸದವರು ನನಗೆ ಸಹಾಯ ಮಾಡಿದ್ದಾರೆ. ಇಬ್ಬರು (ಗಂಡಸರು) ತುಂಟತನ ಮಾಡಿ ಕೆಲಸ ಬಿಟ್ಟರು. ಮತ್ತಿಬ್ಬರು (ಹೆಂಗಸರು) ಯಾವುದೇ ರೀತಿಯ ರೀತಿ ಸಮಸ್ಯೆ ಸೃಷ್ಟಿ ಮಾಡದೆ ಸಹಾಯಮಾಡಿದ್ದಾರೆ. ಅವರಲ್ಲೊಬ್ಬರು ಈಗಲೂ ನನ್ನ ಗುವಾಹತಿಯ ಚಾತುರ್ಮಾಸದಲ್ಲಿ ಸಹಾಯ ಮಾಡುತ್ತಾರೆ. ಕಳೆದ ಕೆಲವು ದಿನಗಳಿಂದ ಐದನೆಯವರೊಬ್ಬರು (ಹೆಂಗಸು) ನನ್ನ ಕೊನೆಯ ವಾಸಸ್ಥಾನವಾದ ಕೋಲಾರದಲ್ಲಿನ ಅಪ್ಪ ಕಟ್ಟಿದ ಮನೆಯಲ್ಲಿ ಕೆಲಸಮಾಡಲು ಶುರು ಮಾಡಿದ್ದಾರೆ. ಇವರೆಲ್ಲರಿಗೂ, ತುಂಟತನ ತರಳೆ ಮಾಡಿ ಕೆಲವಾರು ಸಮಸ್ಯೆಗಳನ್ನು ಉಂಟುಮಾಡಿದವರಿಗೂ, ಈ ಬರವಣಿಗೆ ವಂದನೆಗಳನ್ನು ಹೇಳುವ ಪ್ರಯತ್ನ. Read the rest of this entry »

Leave a Comment

ಕರಿ, ಬಿಳಿ

ಕರಿ, ಬಿಳಿ

ಮೈಕೆಲ್ ಜಾಕ್ಸನ್ ತೀರಿಕೊಂಡ ಅಂತ ಬೆಳಿಗ್ಗೆ ರೇಡಿಯೋಲಿ ಸುದ್ದಿ ಕೇಳಿದಾಗ ಒಂದು ರೀತಿ ನನಗಿಂತ ಸಣ್ಣವರು ತೀರಿಕೊಂಡಾಗ ಸಹಜವಾಗೇ ಆಗುವ, ಈ ಸಣ್ಣವಯಸ್ಸಿನಲ್ಲಿ ಹೋಗಬಾರದಾಗಿತ್ತು ಅನ್ನಿಸಿಕೊಳ್ಳುವ, ಸಂತಾಪ ಆಯಿತು.

ಆದರೆ ಇಷ್ಟು ಹೇಳಿ ಕೈತೊಳೆದುಕೊಳ್ಳುವುದು ಸಾಧ್ಯವಿಲ್ಲ. ಏಕೆಂದರೆ ತೀರಿಕೊಂಡ ವ್ಯಕ್ತಿ ಒಬ್ಬ ವಿಶ್ವಪ್ರಸಿದ್ಧ ವ್ಯಕ್ತಿ. ಲಕ್ಷಾಂತರ, ಏಕೆ ಕೋಟ್ಯಾಂತರ ಮಂದಿ, ಅದರಲ್ಲೂ ಯುವಕ ಯುವತಿಯರಸಮಾಜ, ಅವನನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿತ್ತು. ಅವನ ಹಾಡುಗಾರಿಕೆ, ಅವನ ಜೀವನ ಶೈಲಿ, ಇವೆಲ್ಲವೂ ಅವುಗಳ ವೈಶಿಷ್ಟ್ಯತೆಯಿಂದ ಪೃಥಿವಿಯ ಎಲ್ಲ ಭಾಗದವರನ್ನೂ ಸೆಳೆದಿದ್ದವು. ಹೊಟೆಲೊಂದರಲ್ಲಿ ಒಮ್ಮೆ ರಾತ್ರಿ ಕಳೆಯಬೇಕಾಗಿದ್ದಾಗ ಟಿವಿ ಯಲ್ಲಿ ಅವನ ಸಂಗಿತ, ಕುಣಿತದ ಕಾರ್ಯಕ್ರಮ ನೋಡಿದ್ದೆ. ಪ್ರೇಕ್ಷಕರನ್ನು ಹುಚ್ಚು ಹಿಡಿಸಬಲ್ಲ ಮಾಟ ಅವನದಾಗಿತ್ತು. ಇಂಗ್ಲಿಷಿನಲ್ಲಿ mass frenzy ಅಂತಾರಲ್ಲ, ಅದನ್ನು ಉತ್ತೇಜಿಸುವುದು, ಪ್ರಚೋದಿಸುವುದು, ಅದರಿಂದ ಲಾಭ ಗಳಿಸುವುದು ಅವನ ವೈಶಿಷ್ಟ್ಯ. Read the rest of this entry »

Comments (1)

Older Posts »